ನಾನು ಸಂಜೆ ನನ್ನ ಬೈಕ್ ನಲ್ಲಿ ರಸ್ತೆಯಲ್ಲಿ ಸಂಚರಿಸುತ್ತಿರುವಾಗ ....ಒಂದು ಪುಟ್ಟ ಅಳಿಲು ಮರಿ ಮಾರ್ಗ ಮಧ್ಯೆ ನರಳುತ್ತಿರುವುದ ಕಂಡೆ. ಕೂಡಲೇ ಬೈಕ್ ನಿಲ್ಲಿಸಿ ಅದರ ಬಳಿ ಹೋಗಿ ಅದನ್ನು ಡಾಕ್ಟರ್ ಬಳಿ ಒಯ್ಯ ಬೇಕೆಂದಿದ್ದೆ . ನಾನು ಅದನ್ನು ಕೈಯಲ್ಲಿ ಎತ್ತಿಕೊದ ಕ್ಷಣದಲ್ಲೇ ಅದು ನನ್ನ ಕೈಯಲ್ಲೇ ಪ್ರಾಣ ಬಿಟ್ಟಿತು...ಪಾಪ ಸಂಜೆ ಮನೆ ಸೇರುವ ತವಕದಲ್ಲಿದ್ದ ಆ ಪುಟ್ಟ ಜೀವ ತನ್ನ ಜೀವನದ ಯಾತ್ರೆಯನ್ನೇ ಮುಗಿಸಬೇಕಾಯಿತು...ಅದರ ಬರುವಿಕೆಗಾಗಿ ಅದರ ಬಂಧು ಬಳಗದವರು ಎಷ್ಟು ಕಾತರದಿಂದ ಕಾಯುತ್ತಿದ್ದರೋ...!!!! ನಾವು ಸ್ವಾರ್ಥಿಗಳು ಆ ಸಾಧು ಜೀವಿಗಳ ಜೀವಕ್ಕೆ ಬೆಲೆ ಕೊಡುವಸ್ತು ಸೌಜನ್ಯತೆ ನಮಗೆಲ್ಲಿದೇ ಹೇಳಿ..ನನಗೊಂದು ಕ್ಷಣ ಅಳು ಬಂತು...ಬಳಿಕ ಅದನ್ನು ಮಣ್ಣಿನಲ್ಲಿ ಹುತು ನನ್ನ ಕರ್ತವ್ಯ ಮಾಡಿದ್ದೇನೆ ಎಂಬ ಸಮಾಧಾನ ಒಂದು ಬಿಟ್ಟರೆ...ಇನ್ನು ಮನಸ್ಸಿನಲ್ಲಿ ಉಳಿದದ್ದು ದುಃಖ ಮಾತ್ರ..... ದಯವಿಟ್ಟು ಇನ್ನು ಮುಂದಾದರು ಆ ಸಾಧು ಪ್ರಾಣಿಗಳ ಬಲಿ ತೆಗೆದುಕೊಳ್ಳಬೇಡಿ..ನಾವು ಜಿವಿಸೋಣ ಅವುಗಳನ್ನೂ ಜೀವಿಸಲು ಬಿಡೋಣ.
ಇಂತಿ ಪ್ರಾಣಿ ಪ್ರೀಯ...ಕೆ.ನಾ .ಗೋರೆ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ